ಯುದ್ಧ

ಯುದ್ಧ ಯುದ್ಧ ಯುದ್ಧ
ಎಲ್ಲೆಲ್ಲೂ ಯುದ್ಧ!
ದೇಶ ದೇಶಗಳ ಗಡಿಗಳಲ್ಲಿ,
ದ್ವೇಷದ ಉರಿಹತ್ತಿದಲ್ಲಿ,
ಮತಾಂಧತೆಯ ಮರುಳು ಮುತ್ತಿದಲ್ಲಿ
ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ
ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ.
ಉರುಳುವುದು ಹೆಣಗಳ ಸಾಲು ಸಾಲು.
ಭೂಮಿತಾಯಿಯ ಮಡಿಲೆಲ್ಲ ರಕ್ತದೋಕುಳಿ.

ಮನೆ ಮನದೊಳಗೂ ಕುರುಕ್ಷೇತ್ರ!
ಇಲ್ಲಿ ರಕ್ತದೋಕುಳಿಯಿಲ್ಲ
ಹರಿಯುತ್ತದೆ ಕಣ್ಣೀರ ಕೋಡಿ!
ಮಾಜುವುದಿಲ್ಲ ಕೆನ್ನೆಯ ಮೇಲಿನ ಕಣ್ಣೀರ ಗುರುತು
ತುಟಿಯ ಅಂಚಿನ ನೋವಿನ ಅವ್ಯಕ್ತ ಗೆರೆ.
ಇಲ್ಲಿ ಮೃತ್ಯು ಕುಣಿತವಿಲ್ಲ
ಹಣಗಳು ಉರುಳುವುದಿಲ್ಲ.
ಸಾಯುತ್ತವೆ ಮನಸ್ಸು ಮನಸ್ಸುಗಳು,
ಕಳಚಿಕೊಳ್ಳುತ್ತವೆ ಬೆಸೆದಿದ್ದ ಕೊಂಡಿಗಳು.

ಎಲ್ಲೆಲ್ಲೂ ನಡೆಯುತ್ತಲೇ ಇವೆ ಯುದ್ಧ
ಭಾವನೆಗಳ ಯುದ್ಧ, ಅಹಂಗಳ ಯುದ್ಧ
ಸಮಾನತೆಗಾಗಿ ಯುದ್ಧ, ಹಕ್ಕುಗಳಿಗಾಗಿ ಯುದ್ಧ
ಮನೆಮನೆಯಲ್ಲಿ ಮನಮನದಲ್ಲಿ ಯುದ್ಧ.
ಇಲ್ಲಿ ಸಮರ ವಿರಾಮವಿಲ್ಲ.
ಯಾರೂ ಶಾಂತಿಯ ಗೆರೆ ಎಳೆಯುವುದಿಲ್ಲ.
ನಮಗೆ ನಾವೇ ಶಾಂತಿದೂತರು
ಜೀವನ ಸಮರದಲಿ
ಗೀತೋಪದೇಶ ಮಾಡಬೇಕಾದವರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು
Next post ಬಿಡುಗಡೆ ಕ್ಷಣ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys